ಮುಟ್ಟಿದರೆ ಮುನಿ ಸಸ್ಯದ ಎಲ್ಲಾ ಭಾಗವೂ ಮನೆ ಔಷಧಿ ತಯಾರಿಕೆಗೆ ಬಹಳ ಉಪಯುಕ್ತವಾದುದು.ಆಂಗ್ಲ ಭಾಷೆಯಲ್ಲಿ “ಟಚ್ ಮಿ ನಾಟ್- ಶೇಮ್ ಪ್ಲಾಂಟ್’ ಎಂದು ಕರೆಯುತ್ತಾರೆ.
-
ಅಧಿಕ ರಕ್ತಸ್ರಾವ:
- ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ, ನಾಚಿಕೆಮುಳ್ಳಿನ ಗಿಡ ,ಎಲೆ ಹಾಗೂ ಬೇರುಗಳನ್ನು ಜಜ್ಜಿ ಕಷಾಯ ಮಾಡಿ ಬಳಸಬಹುದು.
-
ಅನಿಯಮಿತ ಮುಟ್ಟಿನ ಸಮಸ್ಯೆ:
- ಈ ಗಿಡದ ಕಷಾಯವನ್ನು ಸೇವನೆ ಮಾಡುವುದು ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಹತೋಟಿ ಮಾಡುತ್ತದೆ.
-
ಬಾವುಗಳಿಗೆ:
- ಮಂಗನ ಬಾವು ಮತ್ತುದೇಹದ ಯಾವುದೇ ಭಾಗದಲ್ಲಿ ಇತರ ಬಾವುಗಳಾಗಿದ್ದರೆ, ನಾಚಿಕೆಮುಳ್ಳಿನ ಎಲೆಗಳನ್ನು ಅರೆದು ರಸವನ್ನು ಹಚ್ಚುವುದು ಪರಿಣಾಮಕಾರಿ.
- ನಾಚಿಕೆಮುಳ್ಳಿನ ಎಲೆಗಳನ್ನು ಅರೆದು ಚೇಳು ಚುಚ್ಚಿದ ಸ್ಥಳಕ್ಕೆ ಲೇಪಿಸುತ್ತಾ, ಅದರ ಬೇರನ್ನು ಜಗಿದು ನುಂಗುವುದರಿಂದ ನೋವು ಮತ್ತು ಬಾವು ತ್ವರಿತವಾಗಿ ಕಡಿಮೆಯಾಗುತ್ತದೆ.
-
ಗಾಯಗಳಿಗೆ:
- ಗಾಯಗಳ ಮೇಲೆ ರಕ್ತಸ್ರಾವವಾಗುತ್ತಿದ್ದರೆ, ಎಲೆಗಳನ್ನು ಜಜ್ಜಿ ರಸ ಅಥವಾ ಪೇಸ್ಟ್ ಮಾಡಿ ಹಚ್ಚಿದರೆ ಗಾಯಗಳು ಬೇಗ ಗುಣವಾಗುತ್ತವೆ.
-
ಕಜ್ಜಿ ಮತ್ತು ತುರಿಕೆಗಳಿಗೆ:
- ತುರಿಕೆ ಮತ್ತು ಕಜ್ಜಿಗೆ ನಾಚಿಕೆಮುಳ್ಳಿನ ಎಲೆಗಳ ರಸ ಅಥವಾ ಎಣ್ಣೆ ಹಚ್ಚುವುದು ತ್ವರಿತ ಪರಿಹಾರ ಒದಗಿಸುತ್ತದೆ.
-
ಬಾಯಿ ದುರ್ಗಂಧ ಮತ್ತು ಹಲ್ಲು ನೋವಿಗೆ:
- ನಾಚಿಕೆಮುಳ್ಳಿನ ಗಿಡದಿಂದ ಕಷಾಯ ತಯಾರಿಸಿ ಬಾಯಿಯಲ್ಲಿ ಮುಕ್ಕಳಿಸಿದರೆ, ದುರ್ಗಂಧ ಮತ್ತು ಹಲ್ಲು ನೋವು ಕಡಿಮೆಯಾಗುತ್ತದೆ.
- ಒಂದು ಒಳ ಮುಷ್ಠಿ ಯಷ್ಟು ಮುಟ್ಟಿದರೆ ಮುನಿ ಎಲೆ ನಾಲ್ಕು ಕಾಳುಮೆಣಸು ಚಿಟಿಕೆಯಷ್ಟು ಉಪ್ಪು ಸೇರಿಸಿ ಚೆನ್ನಾಗಿ ಅರೆಯಬೇಕು.ಉಂಡೆ ಮಾಡಿ ನೋವು ಇರುವ ಹಲ್ಲಿಗೆ ಇಟ್ಟು ಗಟ್ಟಿಯಾಗಿ ಕಚ್ಚಿ ಜೊಲ್ಲು ರಸ ಹೊರ ಹಾಕುತ್ತಾ ಇರಿ. ಅರ್ಧ ಗಂಟೆಗೆ ಗುಣವಾಗುತ್ತದೆ.ಹಲ್ಲು ಹುಳುಕು ಇದ್ದರೂ ನೋವು ಕಡಿಮೆಯಾಗುತ್ತದೆ..
-
ಮೂಲವ್ಯಾಧಿಗೆ:
- ನಾಚಿಕೆಮುಳ್ಳಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ, ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿಗೆ ಬೆರೆಸಿ ಕುಡಿದರೆ ಅಥವಾ ಗಿಡದ ಕಷಾಯ ಮಾಡಿ ಕುಡಿದರೆ ಮೂಲವ್ಯಾಧಿ ಸಮಸ್ಯೆ ನಿಯಂತ್ರಣಗೊಳ್ಳುತ್ತದೆ.
ತಲೆಯ ನೋವು ಮತ್ತು ಒತ್ತಡ ನಿರ್ವಹಣೆ:
- ನಾಚಿಕೆಮುಳ್ಳಿನ ಎಲೆಗಳ ಚೂರ್ಣ ಅಥವಾ ಕಷಾಯ ಮಿತ ಪ್ರಮಾಣದಲ್ಲಿ ಸೇವಿಸಿದರೆ ತಲೆಯ ನೋವು ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
- ಎಲುಬುಗಳ ನೋವು ಪರಿಹಾರಕ್ಕೆ:
- ಬಿದ್ದು ಕೈಕಾಲುಗಳ ಎಲುಬುಗಳಿಗೆ ಘಾಸಿಯಾಗಿದ್ದರೆ ಸಮೂಲಾಗ್ರ ನಾಚಿಕೆ ಗಿಡ ಮತ್ತು ಸಾಸಿವೆ ಸೇರಿಸಿ ತೈಲ ತಯಾರಿಸಿ ಹಚ್ಚುವುದರಿಂದ ಶೀಘ್ರ ಗುಣವಾಗುತ್ತದೆ.
- ನಾಚಿಕೆ ಮುಳ್ಳಿನ ಭಾಗಗಳನ್ನು ನಿಂಬೆರಸದಲ್ಲಿ ಅರೆದು ಬಿಸಿಮಾಡಿ ಲೇಪಿಸಬೇಕು.
- ಬಹುಮೂತ್ರ ಮತ್ತು ಉರಿಮೂತ್ರ ಸಮಸ್ಯೆಗೆ :
- ಪದೇ ಪದೇ ಮೂತ್ರ ವಿಸರ್ಜನೆ ಹಾಗೂ ಉರಿಮೂತ್ರ ಸಮಸ್ಯೆ ಇದ್ದರೆ ಅಂಥವರು ಇದರ ಕಷಾಯ ಸೇವಿಸಬಹುದು.
ಕಷಾಯ ಮಾಡುವ ವಿಧಾನ :
ನಾಚಿಕೆ ಮುಳ್ಳಿನ 2 ಗಿಡಗಳನ್ನು ತಂದು ಕಾಂಡ ,ಎಲೆ ಹಾಗೂ ಬೇರನ್ನು ಚೆನ್ನಾಗಿ ತೊಳೆದು ಹೂಗಳನ್ನು ತೆಗೆದು ಹಾಕಿ ಜಜ್ಜಿ ಎರಡು ಗ್ಲಾಸ್ ಕುದಿಯುವ ನೀರಿಗೆ ಹಾಕಿ ಅರ್ಧ ಚಮಚ ಜೀರಿಗೆಯನ್ನು ಸೇರಿಸಿ ಕುದಿಸಿ ಅದು ಒಂದು ಗ್ಲಾಸಿಗೆ ಬತ್ತಿದಾಗ ಅದನ್ನು ಶೋಧಿಸಿ ದಿನಕ್ಕೆ ಎರಡು ಸಲ ಅರ್ಧರ್ಧ ಗ್ಲಾಸಿನಂತೆ ಕುಡಿಯಿರಿ
ವಿಸೂ : ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು.ಇವುಗಳು ಶರೀರ ಪ್ರಕೃತಿ ,ವಯಸ್ಸು ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಿರುತ್ತದೆ.