ರಕ್ಷಾಬಂಧನದ ಮಹತ್ವ


ಪೀಠಿಕೆ:
ಭಾರತ ದೇಶವು ಸಂಸ್ಕೃತಿಗಳ ತವರು ಹಾಗೂ ಹಬ್ಬಗಳ ನಾಡು. ಇಲ್ಲಿ ನಾವು ಆಚರಿಸುವಂತಹ ಪ್ರತಿಯೊಂದು ಆಚರಣೆಗಳಿಗೂ ಅದರದೇ ಆದಂತಹ ವಿಶೇಷತೆ ಇರುತ್ತದೆ. ಸಂಬಂಧಗಳಿಗೆ  ಮಹತ್ವ ಕೊಡುವ ನಮ್ಮ ಈ ನಾಡಲ್ಲಿ ಸೋದರ-ಸೋದರಿಯರ ಸಂಬಂಧವನ್ನು ಹಾಗೂ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ ರಕ್ಷಾಬಂಧನ. ಶ್ರಾವಣ ಹುಣ್ಣಿಮೆಯ ದಿನ ಈ ಹಬ್ಬವನ್ನು ಆಚರಿಸುತ್ತೇವೆ.
ವಿಷಯ ವಿವರಣೆ:ರಕ್ಷಾಬಂಧನದಂದು ಸೋದರಿಯು ತನ್ನ ಸೋದರನ ಹಣೆಗೆ ತಿಲಕವನ್ನಿಟ್ಟು, ಬಲಗೈಗೆ ರಾಖಿ ಕಟ್ಟಿ, ಆರತಿಯನ್ನು ಬೆಳಗಿ, ಸಿಹಿಯನ್ನು ತಿನ್ನಿಸಿ, ಅಣ್ಣನಿಂದ ಉಡುಗೊರೆ ಪಡೆದು ಸಂತಸದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ತನ್ನ ಸೋದರನ ಬಾಳಲ್ಲಿ ಯಶಸ್ಸು, ಶ್ರೇಯಸ್ಸು, ಅಭಿವೃದ್ಧಿ, ನೆಮ್ಮದಿ ತುಂಬಿರಲಿ ಎಂದು ಸಹೋದರಿಯು ಬೇಡಿಕೊಳ್ಳುತ್ತಾಳೆ. ರಕ್ಷಾ ಬಂಧನವೂ ತಂಗಿಗೆ ಅಣ್ಣನ ಮೇಲೆ ಇರುವ ಅಕ್ಕರೆಯನ್ನು, ಅಣ್ಣನಿಗೆ ಸಹೋದರಿಯ ಮೇಲೆ ಇರುವ ಕಾಳಜಿಯನ್ನು ಹೊರಹಾಕುವ ಹಬ್ಬವಾಗಿದೆ. ಈ ದಿನವನ್ನು ನೂಲಹುಣ್ಣಿಮೆಯಾಗಿ ಆಚರಿಸಲಾಗುತ್ತದೆ.
ಮಾರುಕಟ್ಟೆಗೆ ಬೇರೆಬೇರೆ ಬಣ್ಣದ ವಿನ್ಯಾಸದ ಭಿನ್ನ ಭಿನ್ನ ರೀತಿಯ ರಾಖಿಗಳು ಬರುತ್ತವೆ.ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗಿನ ರಾಖಿಗಳು ಮಾರಾಟಕ್ಕೆ ಇರುತ್ತದೆ. 
ಹಿಂದೆ ಉತ್ತರ ಭಾರತದಲ್ಲಿ ಹೆಚ್ಚಾಗಿ ಪ್ರಚಲಿತವಾಗಿದ್ದ ಈ ಹಬ್ಬ ಇಂದು ದಕ್ಷಿಣ ಭಾರತದಲ್ಲೂ ಆಚರಿಸುತ್ತೇವೆ. ದೇಶದ ಎಲ್ಲಾ ಕಡೆಗಳಲ್ಲೂ ಜಾತಿಭೇದವಿಲ್ಲದೆ ಎಲ್ಲ ಜನಾಂಗದ ಜನರು ಕೂಡ ಸಂಭ್ರಮದಿಂದ ಆಚರಿಸುವ ಹಬ್ಬ ರಕ್ಷಾಬಂಧನ . ಪುರಾಣಗಳಲ್ಲೂ ಈ ಹಬ್ಬದ ಬಗ್ಗೆ ಉಲ್ಲೇಖವಿದೆ.
ಉಪಸಂಹಾರ:ವರ್ತಮಾನದ ಪರಿಸ್ಥಿತಿಯಲ್ಲಿ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ನೋಡಿದಾಗ ರಕ್ಷಾ ಬಂಧನ ಹಬ್ಬವನ್ನು ವಿಶೇಷವಾಗಿ ಆಚರಿಸುವುದು ಮಹತ್ವಪೂರ್ಣವಾಗಿದೆ. ಸ್ತ್ರೀ ರಕ್ಷಣೆಯ ದೃಷ್ಟಿಯಿಂದ ಈ ಹಬ್ಬವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.

 

      🙏ಧನ್ಯವಾದಗಳು 🙏

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು