ಮಕ್ಕಳ ದಿನಾಚರಣೆ


 
ಟಿಪ್ಪಣಿ :

ಪ್ರತಿವರ್ಷ ನವೆಂಬರ್ 14 ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ, ಮಕ್ಕಳನ್ನು ದೇಶದ ಭವಿಷ್ಯ ಎಂದು ಪರಿಗಣಿಸಿದ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಮಕ್ಕಳ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು

ವಿಷಯ ವಿವರಣೆ :

ಪಂಡಿತ್ ನೆಹರು ಮಕ್ಕಳನ್ನು ದೇಶದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂದು ಪರಿಗಣಿಸಿದ್ದರು. ಇಂದಿನ ಮಕ್ಕಳು ಭವಿಷ್ಯದ ಭಾರತವನ್ನು ಕಟ್ಟುತ್ತಾರೆ ಎಂದು ಪಂ.ನೆಹರು ಹೇಳಿದ್ದರು. ನಾವು ಅವರನ್ನು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ದೇಶದ ಭವಿಷ್ಯ ನಿಂತಿದೆ.ಭಾರತದಲ್ಲಿ ಮಕ್ಕಳ ದಿನವನ್ನು 1959 ರಿಂದ ಆಚರಿಸಲಾಗುತ್ತಿದೆ, ಆದರೆ ನಂತರ ಮಕ್ಕಳ ದಿನವನ್ನು ನವೆಂಬರ್ 20 ರಂದು ಮಾತ್ರ ಆಚರಿಸಲಾಯಿತು. ಆದರೆ 1964ರಲ್ಲಿ ನೆಹರೂ ಅವರ ನಿಧನದ ನಂತರ ಅವರ ಜನ್ಮದಿನವಾದ ನವೆಂಬರ್ 14ನ್ನು ಪ್ರತಿ ವರ್ಷ ಮಕ್ಕಳ ದಿನವನ್ನಾಗಿ ಆಚರಿಸಲು ಘೋಷಿಸಲಾಯಿತು.

ಮಕ್ಕಳ ದಿನದಂದು, ಭಾರತದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ನಾಟಕಗಳು, ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅಲ್ಲದೆ, ಸಿಹಿತಿಂಡಿಗಳು, ಪುಸ್ತಕಗಳು, ಬಹುಮಾನಗಳನ್ನು ಮಕ್ಕಳಿಗೆ ವಿತರಿಸಲಾಗುತ್ತದೆ.  ಮಕ್ಕಳು ರಾಷ್ಟ್ರದ ಭವಿಷ್ಯದ ನಾಯಕರು ಮತ್ತು ನಮ್ಮ ದೇಶದ ಭವಿಷ್ಯವು ನಾವು ಮಕ್ಕಳನ್ನು ಎಷ್ಟು ಚೆನ್ನಾಗಿ ಬೆಳೆಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಉಪಸಂಹಾರ:

ಮಕ್ಕಳ ದಿನಾಚರಣೆಯನ್ನು ಪ್ರಾರಂಭಿಸಲು ಮೂಲಭೂತ ಕಾರಣವೆಂದರೆ ಮಕ್ಕಳ ಅಗತ್ಯಗಳನ್ನು ಒಪ್ಪಿಕೊಳ್ಳುವುದು, ಅವಶ್ಯಕತೆಗಳನ್ನು ಪೂರೈಸುವುದು, ಅವರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಶೋಷಣೆಯನ್ನು ನಿಲ್ಲಿಸುವುದೇ ಆಗಿದೆ ಇದರಿಂದ ಮಕ್ಕಳ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ.

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು