ಕರಿಮೆಣಸು ಔಷಧೀಯ ಗುಣಗಳು ಹಾಗೂ ಉಪಯೋಗಗಳು

 

ಕರಿಮೆಣಸು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಅನೇಕ ಅದ್ಭುತ ಔಷಧೀಯ ಗುಣಗಳು ಅಡಗಿವೆ. ನಮ್ಮ ಅಡುಗೆ ಮನೆಯಲ್ಲಿ ಸಿಗುವ ಈ ಆಹಾರ ಪದಾರ್ಥದಿಂದ ಒಳ್ಳೆಯ ಆರೋಗ್ಯ ಪಡೆಯಬಹುದು ಎನ್ನುತ್ತಾರೆ ವೈದ್ಯರು.

ರೋಗಗಳ ನಿವಾರಣೆಗೆ ಕರಿಮೆಣಸನ್ನು ಬಳಸುವ ವಿಧಾನಗಳು:

ರೋಗನಿರೋಧಕ ಶಕ್ತಿ ಹೆಚ್ಚಿಸಲು:

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಕರಿಮೆಣಸನ್ನು ಜಗಿದು ಬೆಚ್ಚಗಿನ ನೀರಿನೊಂದಿಗೆ  ಸೇವಿಸಬಹುದು.

ಕೀಲು ನೋವು ಮತ್ತು ಸಂಧಿವಾತಕ್ಕೆ:

ಹಾಲಿನಲ್ಲಿ ಚಿಟಿಕೆ ಕರಿಮೆಣಸಿನ ಪುಡಿ ಮತ್ತು ಸ್ವಲ್ಪ ಒಣ ಶುಂಠಿ ಸೇರಿಸಿ ಮಲಗುವ ಮುನ್ನ ಕುಡಿಯಿರಿ. ಇದರಿಂದ ಉರಿಯೂತ ಕಡಿಮೆಯಾಗುತ್ತದೆ.

ಕೋಬ್ಬು ಕಡಿಮೆ ಮಾಡಲು:

ಪ್ರತಿದಿನ ಆಹಾರದೊಂದಿಗೆ ಅಥವಾ ಮುಂಜಾನೆಯ ಟೀ/ಕಾಫಿಯೊಡನೆ ಕಾಲು ಚಮಚ ಕರಿಮೆಣಸಿನ ಪುಡಿಯನ್ನು ಸೇರಿಸಿ ಸೇವನೆ ಮಾಡಬಹುದು.

ವಿಷನಾಶಕ ಗುಣ:

ಒಂದು ಚಮಚ ಕರಿಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸುವುದು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಕೂದಲ ಆರೋಗ್ಯಕ್ಕಾಗಿ:

ಕರಿಮೆಣಸಿನ ಪುಡಿಯನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಕಾಯಿಸಿ ತಲೆಗೆ ಹಚ್ಚಿ ಕೆಲ ಹೊತ್ತಿನ ನಂತರ ತೊಳೆದುಕೊಳ್ಳಿ.

ಕ್ಯಾನ್ಸರ್ ತಡೆಗಟ್ಟಲು:

ಅರಿಶಿನ ಮತ್ತು ಕರಿಮೆಣಸನ್ನು ಬೆರೆಸಿ ನಿತ್ಯ ಸೇವನೆ ಮಾಡುವುದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.

ಹಾರ್ಮೋನು ಸಮತೋಲನಕ್ಕೆ:

ಕರಿಮೆಣಸನ್ನು ನೀರಿನಲ್ಲಿ ಅಥವಾ ಜೇನಿನಲ್ಲಿ  ಸೇವಿಸುವುದರಿಂದ ಹಾರ್ಮೋನು ಸಮತೋಲನಕ್ಕೆ ಸಹಾಯ ಮಾಡುತ್ತದೆ.

ನಿದ್ರೆ ಸುಧಾರಿಸಲು:

ಚಿಟಿಕೆ ಕರಿಮೆಣಸು ಮತ್ತು ಶುಂಠಿಯನ್ನು ಹಾಲಿನಲ್ಲಿ ಸೇರಿಸಿ ರಾತ್ರಿ ಸೇವಿಸಿದರೆ ನಿದ್ರೆ ಸುಧಾರಿಸುತ್ತದೆ.

ಮಾನಸಿಕ ಒತ್ತಡ ಕಡಿಮೆ ಮಾಡಲು:

ಒಂದು ಚಮಚ ತುಪ್ಪದಲ್ಲಿ ಸ್ವಲ್ಪ ಕರಿಮೆಣಸ ಪುಡಿಯುನ್ನು ಬೆರೆಸಿ ತಿನ್ನುವ ಮೂಲಕ ಒತ್ತಡ ಕಡಿಮೆ ಮಾಡಬಹುದು.

ಶೀತ ಕೆಮ್ಮುಕಫ ಶಮನಕ್ಕೆ: 

ಶೀತ, ಕೆಮ್ಮು ಮತ್ತು ಕಫ ನಿವಾರಣೆ  ಹಾಗೂ ಉಸಿರಾಟ ತೊಂದರೆ ಶಮನಕ್ಕೆ ಕರಿಮೆಣಸಿನಿಂದ ತಯಾರಿಸಿದ ಕಷಾಯ ಬಳಸಬಹುದು.

ಹೊಟ್ಟೆಯ ಸಮಸ್ಯೆಗಳಿಗೆ: 

ಹೊಟ್ಟೆನೋವು, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು, ನಿಂಬೆರಸಕ್ಕೆ ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ ಕುಡಿದರೆ ಪರಿಹಾರ ಸಿಗುತ್ತದೆ.

ಬೆನ್ನು ನೋವಿನ ಸಮಸ್ಯೆಗಳಿಗೆ ರಾಮಬಾಣ:

ಒಂದು ಕಪ್ ಬಿಸಿ ನೀರಿನಲ್ಲಿ ಒಂದು ಚಿಟಿಕೆ ಕರಿ ಮೆಣಸಿನ ಪುಡಿ ಮತ್ತು ಒಂದು ಚಮಚ ಬೆಲ್ಲದ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಚಹದಂತೆ ಕುಡಿಯಿರಿ. ಇದು ಬೆನ್ನು ನೋವಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಜೀರ್ಣಕ್ರಿಯೆಯಲ್ಲಿ : ಒಂದು ಚಮಚ ಬೆಲ್ಲದ ಪುಡಿಗೆ ಅರ್ಧ ಚಮಚ ಕರಿಮೆಣಸಿನ ಪುಡಿ ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ

ಗಮನವಿಡಿ: ಕರಿಮೆಣಸನ್ನು ನಿಯಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಅನಾವಶ್ಯಕವಾಗಿ ಹೆಚ್ಚು ಸೇವಿಸಿದರೆ ಹಾನಿಯುಂಟಾಗಬಹುದು.ಅತಿಯಾದರೆ ಅಮೃತವು ವಿಷವೇ ಎಂಬುದು ನೆನಪಿರಲಿ.ಇವುಗಳನ್ನು ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು