ಅಜೀರ್ಣ ಸಮಸ್ಯೆಗೆ ಪರಿಹಾರ

ಅಜೀರ್ಣ ಸಮಸ್ಯೆಗೆ ಪರಿಹಾರ

*ಅಜೀರ್ಣವಾದಾಗ ಏಲಕ್ಕಿ ಸೇವಿಸುವುದರಿಂದ ಆಹಾರವು 

ಜೀರ್ಣವಾಗಿ ಬಾಯಿ ರುಚಿ ಜಾಸ್ತಿ ಆಗುತ್ತದೆ.

*ಅಜೀರ್ಣಕ್ಕೆ ಅರ್ಧ ಲೋಟ ನೀರಿಗೆ ಎರಡು ಲವಂಗ ಅರ್ಧ ಚಮಚ
ಬೆಳ್ಳುಳ್ಳಿ ರಸ ಹಾಕಿ ಒಂದೆರಡು ಚಿಟಿಕೆ ಸೈಂಧವ ಲವಣ ಹಾಕಿ ಸೇರಿಸಿ
ಕುದಿಸಿ ಕುಡಿಯಬೇಕು

*ಸ್ವಲ್ಪ ಓಮದ ಕಾಳನ್ನು ಬಿಸಿ ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ

 ಒಂದು ಚಮಚ ಕಷಾಯಕ್ಕೆ ಒಂದು ಚಿಟಿಕೆ ಅಡಿಗೆ ಸೋಡಾ ಬೆರೆಸಿ

 ಮಕ್ಕಳಿಗೆ ನೀಡಿದರೆ ಅಜೀರ್ಣದಿಂದ ಉಂಟಾಗುವ ಹೊಟ್ಟೆ

 ಉಬ್ಬರಿಸುವಿಕೆಗೆ ಕಡಿಮೆಯಾಗುತ್ತದೆ.

*ಹಸಿ ಮೂಲಂಗಿ ಹೋಳುಗಳಿಗೆ ಕರಿಮೆಣಸು, ನಿಂಬೆರಸ ಉಪ್ಪು
ಸೇರಿಸಿ ದಿನಕ್ಕೆ ನಾಲ್ಕು ಸಲ ಸೇವಿಸುವುದರಿಂದ ಅಜೀರ್ಣದ
ಹೊಟ್ಟೆ ನೋವು ನಿವಾರಣೆಯಾಗುತ್ತದೆ

*ಹಸಿ ಶುಂಠಿಯೊಂದಿಗೆ ಜೇನುತುಪ್ಪ ನಿಂಬೆರಸ ಹಾಕಿ ಕುಡಿದರೆ
ಅಜೀರ್ಣ ಸಮಸ್ಯೆಗೆ ಪರಿಹಾರವಾಗುತ್ತದೆ .

*ಕರಿಮೆಣಸು, ಸೈಂದವ ಲವಣ ಮತ್ತು ಶುಂಠಿ ಇವುಗಳನ್ನು
ಸಮ ಪ್ರಮಾಣದಲ್ಲಿ ಸೇರಿಸಿ ಚೆನ್ನಾಗಿ  ಅರೆದು ಮಜ್ಜಿಗೆಗೆ
ಸೇರಿಸಿ ಕುಡಿಯುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ

*ಅಜೀರ್ಣವಾದ ಸಮಯದಲ್ಲಿ ಮಜ್ಜಿಗೆ ಅಥವಾ ನೀರಿನೊಂದಿಗೆ
ಓಮದ ಚೂರ್ಣ ಮತ್ತು ಸೈಂದವ ಲವಣವನ್ನು ಸೇರಿಸಿ
ಸೇವಿಸಬಹುದು

*ಅಜೀರ್ಣದ ಹೊಟ್ಟೆ ನೋವಿಗೆ ಅರ್ಧ ಚಮಚ ಇಂಗನ್ನು ಹುರಿದು
ಪುಡಿ ಮಾಡಿ ಮಜ್ಜಿಗೆಯೊಂದಿಗೆ ಸೇರಿಸಿ  ಕುಡಿಯುವುದರಿಂದ
ಗುಣವಾಗುತ್ತದೆ

*ಒಣಶುಂಠಿ ಮತ್ತು ಕೊತ್ತಂಬರಿ ಬೀಜದ ಕಷಾಯ ತಯಾರಿಸಿ 

ಸೇವಿಸಿದರೆ ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿದರೆ ಶೀಘ್ರ

 ಕಡಿಮೆಯಾಗುತ್ತದೆ.

*ಹಸಿ ಶುಂಠಿಯೊಂದಿಗೆ ಜೇನುತುಪ್ಪ ಹಾಗು ನಿಂಬೆರಸ ಹಾಕಿ
ಕುಡಿದರೆ ಅಜೀರ್ಣ ನಿವಾರಣೆಯಾಗುತ್ತದೆ

*ಒಂದು ಲೋಟ ಬಿಸಿ ನೀರಿಗೆ ಕಾಲು ಚಮಚ ಬೆಳ್ಳುಳ್ಳಿ ರಸ ಮತ್ತು
ಸೈಂಧವ ಲವಣವನ್ನು ಸೇರಿಸಿ ದಿನಕ್ಕೆರಡು ಹೊತ್ತು
ಕುಡಿಯುವುದರಿಂದ ಅಜೀರ್ಣದ ಹೊಟ್ಟೆ ನೋವು
ಗುಣವಾಗುತ್ತದೆ.

*ಅನ್ನದ ಗಂಜಿಗೆ ಸ್ವಲ್ಪ ಉಪ್ಪು ಬೆರೆಸಿ ಸೇವಿಸುವುದರಿಂದ

 ಅಜೀರ್ಣ ಸಮಸ್ಯೆ ದೂರವಾಗುತ್ತದೆ.

*ಮಾವಿನ ಕಾಯಿಗೆ ಸ್ವಲ್ಪ ಉಪ್ಪು ಬೆರೆಸಿ ಮತ್ತು ಜೇನುತುಪ್ಪ

 ಲೇಪಿಸಿ ಸೇವಿಸಿದರೆ ಅಜೀರ್ಣ ಸಮಸ್ಯೆ

 ಮಾಯವಾಗುತ್ತದೆ.

*ಒಂದು ಕಪ್ ಬಿಸಿ ನೀರಿಗೆ ಎರಡು ಹನಿ ಪುದೀನಾ ಎಣ್ಣೆ ಹಾಕಿ 

 ತಕ್ಷಣವೇ ಕುಡಿಯಿರಿ. ಇದರಿಂದ ವಾಯು ಮತ್ತು ತೇಗಿನ

 ಸಮಸ್ಯೆಯು ಕಡಿಮೆ ಆಗುವುದು.

*ಒಂದು ವಾರ ಕಾಲ ಕೊತ್ತಂಬರಿ ಬೀಜದ ನೀರು ಸೇವನೆ 

ಮಾಡುವುದರಿಂದ  ಒಳ್ಳೆಯ ಪರಿಣಾಮ ಸಿಗುವುದು.

*ಆಹಾರ ಸೇವನೆಯ ನಂತರ ಸೋಂಪು ಕಾಳುಗಳನ್ನು ಬಾಯಲ್ಲಿ

 ಜಗಿಯುವುದರಿಂದಲೂ ಅಜೀರ್ಣ ಸಮಸ್ಯೆಯನ್ನು ದೂರ

 ಮಾಡಬಹುದು.

*ಒಂದು ಪಿಂಗಾಣಿ ಮೊಸರಿಗೆ ಸ್ವಲ್ಪ ಜೀರಿಗೆ ಪುಡಿ  ಮತ್ತು 

ಉಪ್ಪು ಹಾಕಿಕೊಂಡು ಸೇವನೆ ಮಾಡಿದರೆ ಅದರಿಂದ 

ಅಜೀರ್ಣ ಸಮಸ್ಯೆಯು ದೂರವಾಗುತ್ತದೆ.


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು