ಅಜೀರ್ಣ ಸಮಸ್ಯೆಗೆ ಪರಿಹಾರ
*ಅಜೀರ್ಣವಾದಾಗ ಏಲಕ್ಕಿ ಸೇವಿಸುವುದರಿಂದ ಆಹಾರವು
ಜೀರ್ಣವಾಗಿ ಬಾಯಿ ರುಚಿ ಜಾಸ್ತಿ ಆಗುತ್ತದೆ.
*ಅಜೀರ್ಣಕ್ಕೆ ಅರ್ಧ ಲೋಟ ನೀರಿಗೆ ಎರಡು ಲವಂಗ ಅರ್ಧ ಚಮಚ
ಬೆಳ್ಳುಳ್ಳಿ ರಸ ಹಾಕಿ ಒಂದೆರಡು ಚಿಟಿಕೆ ಸೈಂಧವ ಲವಣ ಹಾಕಿ ಸೇರಿಸಿ
ಕುದಿಸಿ ಕುಡಿಯಬೇಕು
*ಸ್ವಲ್ಪ ಓಮದ ಕಾಳನ್ನು ಬಿಸಿ ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ
ಒಂದು ಚಮಚ ಕಷಾಯಕ್ಕೆ ಒಂದು ಚಿಟಿಕೆ ಅಡಿಗೆ ಸೋಡಾ ಬೆರೆಸಿ
ಮಕ್ಕಳಿಗೆ ನೀಡಿದರೆ ಅಜೀರ್ಣದಿಂದ ಉಂಟಾಗುವ ಹೊಟ್ಟೆ
ಉಬ್ಬರಿಸುವಿಕೆಗೆ ಕಡಿಮೆಯಾಗುತ್ತದೆ.
*ಹಸಿ ಮೂಲಂಗಿ ಹೋಳುಗಳಿಗೆ ಕರಿಮೆಣಸು, ನಿಂಬೆರಸ ಉಪ್ಪು
ಸೇರಿಸಿ ದಿನಕ್ಕೆ ನಾಲ್ಕು ಸಲ ಸೇವಿಸುವುದರಿಂದ ಅಜೀರ್ಣದ
ಹೊಟ್ಟೆ ನೋವು ನಿವಾರಣೆಯಾಗುತ್ತದೆ
*ಹಸಿ ಶುಂಠಿಯೊಂದಿಗೆ ಜೇನುತುಪ್ಪ ನಿಂಬೆರಸ ಹಾಕಿ ಕುಡಿದರೆ
ಅಜೀರ್ಣ ಸಮಸ್ಯೆಗೆ ಪರಿಹಾರವಾಗುತ್ತದೆ .
*ಕರಿಮೆಣಸು, ಸೈಂದವ ಲವಣ ಮತ್ತು ಶುಂಠಿ ಇವುಗಳನ್ನು
ಸಮ ಪ್ರಮಾಣದಲ್ಲಿ ಸೇರಿಸಿ ಚೆನ್ನಾಗಿ ಅರೆದು ಮಜ್ಜಿಗೆಗೆ
ಸೇರಿಸಿ ಕುಡಿಯುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ
*ಅಜೀರ್ಣವಾದ ಸಮಯದಲ್ಲಿ ಮಜ್ಜಿಗೆ ಅಥವಾ ನೀರಿನೊಂದಿಗೆ
ಓಮದ ಚೂರ್ಣ ಮತ್ತು ಸೈಂದವ ಲವಣವನ್ನು ಸೇರಿಸಿ
ಸೇವಿಸಬಹುದು
*ಅಜೀರ್ಣದ ಹೊಟ್ಟೆ ನೋವಿಗೆ ಅರ್ಧ ಚಮಚ ಇಂಗನ್ನು ಹುರಿದು
ಪುಡಿ ಮಾಡಿ ಮಜ್ಜಿಗೆಯೊಂದಿಗೆ ಸೇರಿಸಿ ಕುಡಿಯುವುದರಿಂದ
ಗುಣವಾಗುತ್ತದೆ
*ಒಣಶುಂಠಿ ಮತ್ತು ಕೊತ್ತಂಬರಿ ಬೀಜದ ಕಷಾಯ ತಯಾರಿಸಿ
ಸೇವಿಸಿದರೆ ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿದರೆ ಶೀಘ್ರ
ಕಡಿಮೆಯಾಗುತ್ತದೆ.
*ಹಸಿ ಶುಂಠಿಯೊಂದಿಗೆ ಜೇನುತುಪ್ಪ ಹಾಗು ನಿಂಬೆರಸ ಹಾಕಿ
ಕುಡಿದರೆ ಅಜೀರ್ಣ ನಿವಾರಣೆಯಾಗುತ್ತದೆ
*ಒಂದು ಲೋಟ ಬಿಸಿ ನೀರಿಗೆ ಕಾಲು ಚಮಚ ಬೆಳ್ಳುಳ್ಳಿ ರಸ ಮತ್ತು
ಸೈಂಧವ ಲವಣವನ್ನು ಸೇರಿಸಿ ದಿನಕ್ಕೆರಡು ಹೊತ್ತು
ಕುಡಿಯುವುದರಿಂದ ಅಜೀರ್ಣದ ಹೊಟ್ಟೆ ನೋವು
ಗುಣವಾಗುತ್ತದೆ.
*ಅನ್ನದ ಗಂಜಿಗೆ ಸ್ವಲ್ಪ ಉಪ್ಪು ಬೆರೆಸಿ ಸೇವಿಸುವುದರಿಂದ
ಅಜೀರ್ಣ ಸಮಸ್ಯೆ ದೂರವಾಗುತ್ತದೆ.
*ಮಾವಿನ ಕಾಯಿಗೆ ಸ್ವಲ್ಪ ಉಪ್ಪು ಬೆರೆಸಿ ಮತ್ತು ಜೇನುತುಪ್ಪ
ಲೇಪಿಸಿ ಸೇವಿಸಿದರೆ ಅಜೀರ್ಣ ಸಮಸ್ಯೆ
ಮಾಯವಾಗುತ್ತದೆ.
*ಒಂದು ಕಪ್ ಬಿಸಿ ನೀರಿಗೆ ಎರಡು ಹನಿ ಪುದೀನಾ ಎಣ್ಣೆ ಹಾಕಿ
ತಕ್ಷಣವೇ ಕುಡಿಯಿರಿ. ಇದರಿಂದ ವಾಯು ಮತ್ತು ತೇಗಿನ
ಸಮಸ್ಯೆಯು ಕಡಿಮೆ ಆಗುವುದು.
*ಒಂದು ವಾರ ಕಾಲ ಕೊತ್ತಂಬರಿ ಬೀಜದ ನೀರು ಸೇವನೆ
ಮಾಡುವುದರಿಂದ ಒಳ್ಳೆಯ ಪರಿಣಾಮ ಸಿಗುವುದು.
*ಆಹಾರ ಸೇವನೆಯ ನಂತರ ಸೋಂಪು ಕಾಳುಗಳನ್ನು ಬಾಯಲ್ಲಿ
ಜಗಿಯುವುದರಿಂದಲೂ ಅಜೀರ್ಣ ಸಮಸ್ಯೆಯನ್ನು ದೂರ
ಮಾಡಬಹುದು.
*ಒಂದು ಪಿಂಗಾಣಿ ಮೊಸರಿಗೆ ಸ್ವಲ್ಪ ಜೀರಿಗೆ ಪುಡಿ ಮತ್ತು
ಉಪ್ಪು ಹಾಕಿಕೊಂಡು ಸೇವನೆ ಮಾಡಿದರೆ ಅದರಿಂದ
ಅಜೀರ್ಣ ಸಮಸ್ಯೆಯು ದೂರವಾಗುತ್ತದೆ.