ರಾಷ್ಟ್ರಧ್ವಜದ ವೈಶಿಷ್ಟ್ಯತೆಗಳು

 ಪೀಠಿಕೆ:

ರಾಷ್ಟ್ರಧ್ವಜವು ಪ್ರತಿಯೊಂದು ದೇಶದ ಸ್ವತಂತ್ರತೆ, ಸಂಸ್ಕೃತಿ ಮತ್ತು ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ಸಂಕೇತವಾಗಿದೆ. ಈ ಧ್ವಜವು ಭಾರತ ದೇಶದ ಸಮಗ್ರತೆ ಮತ್ತು ಪರಂಪರೆಯ ಪ್ರತೀಕವಾಗಿದೆ.ಭಾರತದ ನಮ್ಮ ಈ ರಾಷ್ಟ್ರಧ್ವಜವನ್ನು ಪಿಂಗಳಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದರು. 1947ರ ಜುಲೈ 22ರಂದು ಭಾರತೀಯ ಸಂವಿಧಾನ ಸಭೆಯು ಈ ತ್ರಿವರ್ಣ ಧ್ವಜವನ್ನು ಅಧಿಕೃತವಾಗಿ ಅಂಗೀಕರಿಸಿತು.ಧ್ವಜವು ಆಯತಾಕಾರದ ಆಕಾರವನ್ನು ಹೊಂದಿರುತ್ತದೆ. ಇದು ಮೂರು ಬಣ್ಣಗಳಿಂದ ಕೂಡಿದೆ. ಕೇಸರಿ, ಬಿಳಿ ಮತ್ತು ಹಸಿರು ಹಾಗೂ ಮಧ್ಯದಲ್ಲಿ 24 ಗೆರೆಗಳಿರುವ ನೇರಳೆ ಬಣ್ಣದ ಅಶೋಕ ಚಕ್ರವಿದೆ.

ವಿಷಯ ವಿವರಣೆ:

ಭಾರತದ ತ್ರಿವರ್ಣ ಧ್ವಜ ನಮ್ಮ ದೇಶದ ಅಸ್ತಿತ್ವ, ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾಗಿದೆ. ಕಯ್ಯಾರ ಕಿಂಞ್ಞಣ್ಣ ರೈ ಅವರು "ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ..." ಎಂಬ ದೇಶಭಕ್ತಿಗೀತೆಯ ಕೇವಲ ನಾಲ್ಕು ಸಾಲುಗಳಲ್ಲಿ ರಾಷ್ಟ್ರಧ್ವಜದ ಮಹತ್ವವನ್ನು ಅರ್ಥಗರ್ಭಿತವಾಗಿ ವಿವರಿಸಿದ್ದಾರೆ.

ಭಾರತದ ರಾಷ್ಟ್ರಧ್ವಜದಲ್ಲಿ ಮೂರುಹಸಿರು ಬಣ್ಣಗಳಿವೆ:ಧ್ವಜದ ಮೇಲ್ಭಾಗದಲ್ಲಿರುವ ಕೇಸರಿ ಬಣ್ಣವು ಧೈರ್ಯ, ಪರೋಪಕಾರ ಮತ್ತು ತ್ಯಾಗದ ಸಂಕೇತವಾಗಿದೆ.ದೇಶಕ್ಕಾಗಿ ಬಲಿದಾನ ಮಾಡಿದ ವೀರಯೋಧರ ಪರಂಪರೆಯನ್ನು ಸ್ಮರಿಸಲು ಈ ಬಣ್ಣ ಅಳವಡಿಸಲಾಗಿದೆ.

 ಮಧ್ಯಭಾಗದಲ್ಲಿರುವ ಬಿಳಿ ಬಣ್ಣವು ಶಾಂತಿ, ಸತ್ಯ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ.ಇದು ಸತ್ಯ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗುವ ನಡವಳಿಕೆಗೆ ಶಕ್ತಿ ನೀಡುತ್ತದೆ.

ಕೆಳಭಾಗದಲ್ಲಿರುವ ಹಸಿರು ಬಣ್ಣವು ಕೃಷಿ, ಸಮೃದ್ಧಿ ಮತ್ತು ಪರಿಸರ ಸ್ನೇಹೀ ಬದುಕಿನ ಸಂಕೇತವಾಗಿದೆ.ಇದು ಮನುಷ್ಯ ಮತ್ತು ಪ್ರಕೃತಿಯ ಅವಿನಾಭಾವ ಸಂಬಂಧವನ್ನು ನೆನಪಿಸುತ್ತದೆ.

ಧ್ವಜದ ಮಧ್ಯಭಾಗದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವನ್ನು ಅಳವಡಿಸಲಾಗಿದೆ. ಇದನ್ನು ಸಾರಾನಾಥ್ ದ ಅಶೋಕ ಸ್ತಂಭದ ಧರ್ಮಚಕ್ರದಿಂದ ತೆಗೆದುಕೊಳ್ಳಲಾಗಿದೆ.

ಚಕ್ರವು ನೈತಿಕತೆ, ಧರ್ಮ, ನ್ಯಾಯ ಮತ್ತು ಪ್ರಗತಿಯನ್ನು ಪ್ರತಿನಿಧಿಸುತ್ತದೆ.

24 ಗೆರೆಗಳು ಜೀವನದ ವಿವಿಧ ಆಯಾಮಗಳನ್ನು ಸೂಚಿಸುತ್ತವೆ. ಹಾಗೆಯೇ ದೈನಂದಿನ 24 ಗಂಟೆಗಳ ನಿರಂತರ ಕರ್ಮವನ್ನೂ ಪ್ರತಿನಿಧಿಸುತ್ತದೆ.

ಇದು ಪ್ರಗತಿ ಮತ್ತು ಚೇತರಿಕೆಯ ಸಂಕೇತವೂ ಆಗಿದೆ. ಜೀವನವು ನಿರಂತರ ಚಲನೆಯಲ್ಲಿರಬೇಕು ಎಂಬ ಸಂದೇಶವನ್ನು ಕೂಡ ನೀಡುತ್ತದೆ

ಭಾರತ ಸರ್ಕಾರ "ಧ್ವಜ ಸಂಹಿತೆ - 2002" ಅನ್ನು ಜಾರಿಗೆ ತಂದಿದೆ. ಇದರ ಪ್ರಕಾರವಾಗಿ ರಾಷ್ಟ್ರಧ್ವಜವನ್ನು ಯಾವಾಗಲೂ ಗೌರವದಿಂದ ನೋಡಬೇಕು.ಧ್ವಜವು ಯಾವಾಗಲೂ ಗಾಳಿಯ ಕಡೆ ಸರಿಯಾಗಿ ಹಾರಿರಬೇಕು.ಭೂಮಿಗೆ ಮುಟ್ಟಿಸಬಾರದು,  .ಧ್ವಜವನ್ನು  ಸುಡುವುದು, ಹರಿದು ಹಾಕುವುದು ಅಪರಾಧ.ಗಣರಾಜ್ಯೋತ್ಸವ (ಜನವರಿ 26) ಮತ್ತು ಸ್ವಾತಂತ್ರ್ಯ ದಿನ (ಆಗಸ್ಟ್ 15) ದಿನಗಳಲ್ಲಿ ಧ್ವಜಾರೋಹಣ ಅತ್ಯಂತ ಗೌರವದಿಂದ ನಡೆಯಬೇಕು.ರಾಷ್ಟ್ರಧ್ವಜವನ್ನು ಧೂಳಿನಲ್ಲಿಡುವುದು.ಧ್ವಜವನ್ನು ಉಡುಪಿನಲ್ಲಿ ಬಳಸುವುದು.ಇತರ ದೇಶಗಳ ಧ್ವಜಗಳಿಗಿಂತ ಕೆಳಗೆ ಹಾಕುವುದು ಅಪರಾಧ ಎನಿಸುವುದು.

ಭಾರತದ ರಾಷ್ಟ್ರಧ್ವಜವು ನಮ್ಮ ಸ್ವಾತಂತ್ರ್ಯ ಹೋರಾಟದ ಸಂಕೇತ, ರಾಷ್ಟ್ರಪ್ರೇಮದ ಚಿಹ್ನೆ ಮತ್ತು ದೇಶದ ಏಕತೆ, ಭಿನ್ನತೆ, ಸಾಮರಸ್ಯವನ್ನು ಪ್ರತಿಬಿಂಬಿಸುವ ಪ್ರಕಾರವಾಗಿದೆ

ಉಪಸಂಹಾರ:
ಭಾರತದ ತ್ರಿವರ್ಣ ಧ್ವಜವು ಭಾರತೀಯರ ಗೌರವ, ಶ್ರದ್ಧೆ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾಗಿದೆ. ಪ್ರತಿಯೊಬ್ಬ ನಾಗರಿಕನು ಧ್ವಜವನ್ನು ಗೌರವಪೂರ್ವಕವಾಗಿ ನೋಡಬೇಕು ಮತ್ತು ಅದರ ಗೌರವವನ್ನು ಕಾಪಾಡಬೇಕು. ರಾಷ್ಟ್ರಧ್ವಜವನ್ನು ನೋಡಿದಾಗ ನಮ್ಮೆಲ್ಲರ ಮನಸ್ಸಿನಲ್ಲಿ ದೇಶಪ್ರೇಮದ ಭಾವನೆ ತುಂಬಬೇಕು

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು